Friday, May 15, 2015

ನಮ್ಮ ವ್ಯವಸ್ಥೆ!!





ಒಂದು ದನ ಕಾಡನ್ನು ಬಿಟ್ಟು ಏದುಸಿರು ಬಿಡುತ್ತಾ ಓಡುತ್ತಿತ್ತು.
ದಾರಿಯಲ್ಲಿ ಅದನ್ನು ನೋಡಿದ ಒಂದು ಆನೆ ಅದನ್ನು ನಿಲ್ಲಿಸಿ ದನ ಓಡುತ್ತಿರುವ ಕಾರಣವೇನೆಂದು ಕೇಳಿತು.
ಅದಕ್ಕೆ ದನ ಹೇಳಿತು:
ನಿನಗೆ ತಿಳಿಯದೇ ಹೊಸ ಕಾನೂನು ?, ನಮ್ಮ ಸರಕಾರ ಕಾಡಿನ ಎಲ್ಲಾ ಎಮ್ಮೆಗಳನ್ನು ಹಿಡಿದು ಜೈಲಿನೊಳಕ್ಕೆ ತಳ್ಳಲು ವಾರಂಟ್ ಹೊರಡಿಸಿದೆ.
ಆನೆ ನಕ್ಕು ಕೇಳಿತು:
ಸರಕಾರ ಹಿಡಿಯಲು ಹೇಳಿದ್ದು ಎಮ್ಮೆಗಳನ್ನು ತಾನೇ,, ನೀನಂತೂ ದನ , ಯಾಕೆ ಹೆದರಿ ಓಡುತ್ತಿದ್ದೀಯಾ..?
ಅದಕ್ಕೆ ದನ ಹೇಳಿತು
ಹೌದು ನಾನು ದನ ಅಂತ ನಿನಗೆ ಗೊತ್ತಿದೆ, ಆದರೆ ಆ ಹಿಡಿಯಲು ಬರುತ್ತಿರುವರನ್ನು ನಂಬುವ ಹಾಗಿಲ್ಲ,
ಒಮ್ಮೆ ನನ್ನನ್ನು ಹಿಡಿದರೆಂದರೆ ನಾನು ಎಮ್ಮೆ ಅಲ್ಲ ದನ ಅಂತ ಸಾಬೀತು ಪಡಿಸಲು ಇಪ್ಪತ್ತು ವರ್ಷವೇ ಬೇಕಾದಿತು

ಅದಕ್ಕೇ ಓಡುತ್ತಿದ್ದೇನೆ..ಎಂದಿತು.








ಇದನ್ನು ಕೇಳಿದ ಆನೆ ತಾನೂ ದನದ ಜತೆ ಓಡಲು ಆರಂಭಿಸಿತ್ತು
----------------------
## ವಾಟ್ಸಾಪ್ ಅಚ್ಚು



2 comments:

  1. ಸರ್ಕಾರದ ಕಪಿ ಮುಷ್ಟಿಗೆ ಸಮರ್ಥ ವಿಡಂಬನೆ.

    ReplyDelete