Monday, January 30, 2012



ಅಕ್ಕಿ ಮುಡಿ ತಿರಿ ಮತ್ ಹರಿ ಪ್ರಸಾದ್ ನಾಡಿಗ್ರ್

ಆಫೀಸಿನ ಹೊರಹೋಗಲು ಒಂದು ಹೆಜ್ಜೆ ಇಟ್ಟಿದ್ದೆ ಅಷ್ಟೇ. ನನ್ನ ಕರವಾಣಿ ಗುರ್ರಾಯಿಸಿತು. ಹೊರಗಡೆಯ ಮಳೆಯನ್ನೂ ಗಮನಿಸದ ಹಾಗೆ ಹೊಸ ನಂಬರ್.
ಆಫೀಸಿಂದ ಮನೀಗ್ ಹೋಪುಕೆ ಅಂದ್ ಹೇಳಿ ಎರ್ಡ್ ಹೆಜ್ಜೆ ಇಟ್ಟಿದ್ದೆ ಅಷ್ಟೇ.....ನನ್ನ್ ಕೈಯಂಗಿದ್ ಕರ್ಕರೆ ವಾಣಿ ಅರ್ಜಿ ಗುಜ್ರಾಯ್ಸ್ತ್. ಕಂಡ್ರ್ ಹೊರ್ಗ್ ಜೋರ್ ಜಿರಾಪತಿ ಮಳಿ. ಹೊಸ ನಂಬ್ರ...
" ಹಿಲ್ಲೋ" 
ಸ್ವರ ಕೇಂಡ್ರೆ ಗೊತ್ತಾಯ್ತ್ !!!   "ಸೀನ!!!"
"ಎಂತ ಕಥಿ ಮಾರಾಯ ಈಚಿ ಸಿಕ್ಲೇ ಇಲ್ಲೆ"  ಅಂದೆ
"ನಿಮ್  ಬದಿಯೇ ಬರ್ತಾ ಇದ್ನಾ , ಕಾಮ್ಬೊ ಮನಿ ವಿಳಾಸ ಹೇಳ್  "  ಹೇಳ್ದೆ.
ಹತ್ರದಲ್ಲೇ ಎಲ್ಲೋ ಬರ್ತಾ ಇದ್ದ.
ಕಂಡ್ರೆ ಎದ್ರಂಗೇ ಮಳೆಯಲ್ಲೇ ನೆನ್ಕಂಡ್ ಬರ್ತಾ ಇದ್ದ, ಕೈಯಲ್ಲ್ ಕೊಡಿಯೂ ಮಡ್ಸಂಡೇ ಇತ್
ಎಂತಕಾ, ಕೊಡಿ ಬಿಡ್ಸೂಕ್ ಆಯಿಲ್ಯಾ..?ನಂಗ್ ಹೇಳ್ರ್ ಮಳಿಕೋಟ್ ಆರೂ ತತ್ತಿದ್ನಲ್ಲೆ ಮರಾಯಾ..?
ಅದೂ ಇತ್ತಾ ಈ ಬ್ಯಾಗಂಗೆ..!!
"ಮತ್ತೆ ಕೊಡಿಯೂ ಇತ್, ಬಿಡ್ಸಲ್ಲೆ, ಮಳಿ ಕೋಟೂ ಇತ್ , ಅದನ್ನೂ ಹಾಯ್ಕಣಲ್ಲೆ ಎಂತ ಕಥೆ ಮಾರಾಯಾ...?
ಇಲ್ಯಾ, ಬೇಜಾ...ರಾಯ್ತಾ..!!, ಯಾರ್ ಮೇಲಾ..?  ನನ್ ಮೇಲಾ...........?
ಅಲ್ದಾ, ಬೆಂಗ್ಳೂರ್ ಮಳಿ  ಮೇಲಾ...!!
ಅಲ್ಲನಾ, ಯಂತ ಮರಾಯಾ ಬೆಂಗ್ಳೂರ್ ಮಳೆ ಅಂದರೆ ಹೊತ್ತಿಲ್ಲ ಗೊತ್ತಿಲ್ಲ!!! ಕೊಡೆ ಬಿಡಿಸೋದ್ರಲ್ಲಿ ನಾನು ಪೂರಾ ಒದ್ದೆ!! ಅಲ್ಲ ಸ್ವಲ್ಪ ಬಿಟ್ಟರಾತಿಲ್ವಾ?
ಸಿಟ್ಟೇ ಬಂತು. ಎಷ್ಟು ನೆನಸ್ತೆ ಕಾಂಬೋ,  ಅಂತೇಳಿ ಇನ್ನು ಬಿಡ್ಸಿದ್ರೇನು? ಬಿಟ್ಟರೇನು ಅಂತ ಹಾಗೇ ನೆನ್ಕೊಂಡು ಬಂದೆ.
"ಅಂದ ಹಾಗೇ ಯಾಕೋ ಈಕಡೆ?"
"ಯಾಕೆ ಬರ ಬಾರದಾ?"
"ಹಾಗಲ್ಲಪ್ಪಾ ಮಾತಿಗೆ ಕೇಳ್ದೆ."
"ಮೊನ್ನೆ ಮೊನ್ನೆ ನಾಡಿಗರು ಸಿಕ್ಕಿದ್ರು"
ಯಾರು?
"ಅದೇ ಸಂಪದದವರು"
ಎಲಾ  ಇವ್ನ, ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷ ಆಯ್ತು ನನಗಿನ್ನೂ ಅವರ ಭೇಟಿಯ ಭಾಗ್ಯ ಸಿಕ್ಕಿಲ್ಲಾ, ಇವನಿಗೆ ಹೇಗೆ ಸಿಕ್ಕಿದರು?
ಅರೇ ಸಂಪದ ನಿಂಗೆ ಗೊತ್ತಾ?
ಗೊತ್ತಿಲ್ದೇ ಏನು ? ನಂಗೆ ಸಂಪದದ ಎಲ್ಲಾರೂ ಗೊತ್ತು!! ಏನು ನಾಲ್ಕ ಅಕ್ಷರ ಬರೆದ್ರೆ ಮಾತ್ರ ಗೊತ್ತಗೋದೊ ಅಂದ್ಕಂಡಿದ್ದೀಯಾ?
ಅದಿರಲಿ ಇನ್ನೊಂಸರಿ ಎಲ್ಲಾ ಕೇಳ್ತೇನೆ, ಈಗ ವಿಷಯ ಹೇಳು
ಅದೇಕಳೆದ ಸಾರಿ ಅವರು ಊರ ಕಡೆ ಬಂದು ಚೆನ್ನೆ ಮಣೆ ,ಮೊರ ಚರಿಗೆ, ಕಲ್ಲು ಬಾನಿ, ಕಲ್ಮರಿಗೆ, ಸಾಂಬಾರ್ ದಾನಿ ಎಲ್ಲಾ ಫಟ ತೆಕ್ಕೊಂಡ್ ಬಂದಿದ್ದರಲ್ಲ
ಅದರಲ್ಲಿ ಅಕ್ಕಿ ಮುಡಿ ಮತ್ತು ತಿರಿ ಫಟಕ್ಕೆ ಸಿಕ್ಕಿರಲಿಲ್ಲ, ಅದಕ್ಕೇ ಇನ್ನೋದ್ಸಾರಿ ಬೆಂಗ್ಳೂರಿಗೆ ಬಂದ್ರೆ ಬಾ ಅಂದಿರಲ್ಲೆ ಅವರನ್ನು ಕರೀಲಿಕ್ಕೇ  ಬಂದಿದ್ದೆ.
...???? ಪುಣ್ಯ ಮತ್ತೊಮ್ಮೆ ಕರೆವಾಣಿ ಮಾತಾಡಿತು.
"ಸೀನನ ಧರ್ಮ ಪತ್ನಿ!!!           ಮಿಸ್ ಅಲ್ಲಾ ಮಿಸ್ಡ್  ಕಾಲ್
ನಾನು ಕರೆ ಮಾಡಿದೆ
" ಅಣ್ಣಾ ಅವ್ರ್ ಅಲ್ಲೇ ಇದ್ರಾ ಈಗ?"
ಕಾಣಿ ಎಂತಾ ಪರ್ಫೆಕ್ಟ್ ಟೈಮಿಂಗ್!!!    ಕೊಟ್ಟೆ ಸೀನಂಗೆ
 ಆಯ್ತೇ , ಅಕ್ಕೇ ಅಂಬ್ದ್ ಮಾತ್ರ ಗೊತಾಯ್ತ್.,
 "ಎಂತ ಅಂಬ್ರಾ , ಕಳ್ಸಾರಿ ಕೊಟ್ಟ್ ಪೌಡರ್ ಬೇಕ್ ಅಂಬ್ರಾ??  "
ಕಳ್ಸಾರಿ ಮಂಜು ಕೊಟ್  ಮೂರ್ನಾಕ್ ಪೌಡರ್ ಡಬ್ಬಿ ಇದ್ದೀತ್ ಅದನ್ನೇ ಕೊಟ್ಟಿದ್ದೆ ಮೊನ್ನಿ ಊರ್ ಕಡಿ ಹೋದಾಗ್ಳಿಕೆ..
ಅದ್ರ್ ಮಾತೆತ್ತ್ ಬೇಡ್ ನೀನ್ ಎಲ್ಲಾ ಆ ಡಬ್ಬೀದೇ ಹರಿಕಥಿ !!! ಏಮ್ತ್ ಆಯ್ತ್ ಅಂದೇಳಿ ಅವ್ಳ್ ಕತ್ರವೇ ಕೇಣ್!!
ಅದಕ್ಕೂ ನಂದೇ ಖರ್ಚ್
"ಅದೇ ಕಳೆದ ಸಾರಿ ಕೊಟ್ಟಿದ್ರಿಯಲ್ಲೆ ಎಲ್ಲಿಗ್ ಹೋಪ್ದಾದ್ರೂ ಅದೇ ಪೌಡರ್ ಇವ್ರಿಗೆ ಚವ್ಣಿ  ಜಂಬ್  ನಂಗಂತೂ ಅದನ್ ಕಂಡ್ರ್ ಆತಿಲ್ಲೆ. 
ಹಾಕ್ಕಂಬ್ದ್ ಅಂದ್ರೆ ಮುಕ್ಕಾಲ್ ಪಾಲು ನೆಲಕ್ಕೆ ಕಾಲ್ ಭಾಗ ಎದಿಗೆ. ಕಾಲೂರಿದರೆ ಜೊಯ್ ಜಾರುದು. ಮೊನ್ನೆ ಬಿದ್ದ ನಾನು ಸುಧಾರ್ಸ್ಕಂಬಕೆ ಹದ್ನೈದ್ ದಿನ ಅಯ್ತ್."
"ಆಯ್ತು ನಾನು ಅವ್ನಿಗೆ ಹೇಳ್ತೆ"
" ಎಂತ ಈಗ ಹೇಳೂದ್ ನೀವ್? ನಿನ್ನೆ ನಿಮ್ಮಲಿಗ್ ಹೊರ್ಡುವತಿಗ್ ಪುನಃ, ಈ ಸಲಿ ಬೆಡ್ ರೂಮಲ್ ಬ್ಯಾಡ ಅಂದ್ ಹೇಳಿ ಬಾಥ್ ರೂಮಿನ್ ಬಾಗ್ಲ್ ಎದ್ರಿಗ್ ಬೇಸನ್ ಇತ್ತಲ್ಲೆ ಅಲ್ಲೇ ಇಟ್ಟಿದ್ದೆ ಅದೇ ಪೌಡರ್ ಡಬ್ಬೀನ, ಮತ್ ಅದೇ ಹಣೆ ಬರಹ, ಆ ಪೌಡರ್ ಮೇಲೆ ಕಾಲಿಟ್ಟ್ ಬಿದ್ನೆ. ಈ ಸಲಿ ಏಳುವತಿಗ್ ಹಿಡ್ದ್ ಬೇಸನ್ ನನ್ ಮೇಲೇ ಬಿದ್... ಪುಣ್ಯಕ್ಕೆ ಮನಿಯೋರ್ ಬಂದ್ ಆಸ್ಪತ್ರಿಗ್ ಸೇರ್ಸಿದ್ರ್.
ಇನ್ ಜನ್ಮದಗೂ ತರಬೇಡಿ ಅಂದ್ ಹೇಳೂಕೇ ಈ ಫೋನ್ ಮಾಡದ್ದೆ....

ಎಂತ್ ಇಲ್ಯೇ...
ಮುಂದಿನ್ ಕ್ಷಣದಂಗೇ ನಾನೂ ಶೀನ್ ನೂ ಕೆಂಪೇ ಗೌಡ ಬಸ್ ಸ್ಟ್ಯಾಂಡ್ ಕಡಿಗೆ.....

No comments:

Post a Comment