Sunday, September 15, 2013

ಅಬಿಪ್ರಾಯ ಸ್ವಾತಂತ್ರ್ಯ.

ಅಬಿಪ್ರಾಯ ಸ್ವಾತಂತ್ರ್ಯ.

ಬೆಳಿಗ್ಗೆ ಬೆಳಿಗ್ಗೆ ಕರೆ ಬಂತು. ಮುತ್ತನ ಹೆಂಡತಿಯದ್ದು. ಮುತ್ತ ಆಸ್ಪತ್ರೆಯಲ್ಲಿದ್ದಾನಂತೆ...
ನೋಡಲು ಹೋದೆ.
ಯಾಕೋ ಹೀಗೆ ಮಾಡಿಕೊಂಡೆ?
ಎಲ್ಲಾ ನಿನ್ನಿಂದಲೇ ಆದದ್ದು..
ಯಾಕಾ..?
ಅದೇ ಮಿಸಾಲಾರಾಮ ಆಪೂ ಕಥಿ ಇತ್ತಲ್ಲ..?
ಅದೇ ಈಗ ಅವ ಶ್ರೀಕ್ರಷ್ನ ಜನ್ಮ ಸ್ಥಾನದಲ್ಲಿದ್ದಾನಲ್ಲ ಅವನದ್ದಾ? 
ಹೌದು
ಅದಕ್ಕೂ ನೀನೂ ಆಸ್ಪತ್ರೆ ಸೇರೂಕೂ ಎಂತ ಸಂಭಂಧ?
ಅಲ್ಲ ಪಾಪ ಮುದುಕ ಅಲ್ವಾ..? ಎಲ್ಲರೂ ಅವನ ಬಗ್ಗೆ ಬೇಕಾ ಬಿಟ್ಟಿಯಾಗಿ ಮಾತಾಡ್ತಾ ಇದ್ದಾರಲ್ಲಾ ಪಾಪ ಅಂತ ಸಹಾಯಕ್ಕೆ ಹೋದೆ..
ಅವನ ಮಾತಂತೂ ತುಂಬಾ ಚೆನ್ನಾರುತ್ತದೆ, ನಾವು ಇನ್ನೊಬ್ಬರ ಒಳ್ಳೆಯ ವಿಷಯಗಳನ್ನು ಮಾತ್ರ ತಕ್ಕೊಳ್ಳಬೇಕು ಅಂತೆಲ್ಲಾ ಅಂದೆ.
ಸರಿ
ಅವನು ಒಳೆಯವನೇ, ತೆಗೆಯೋದಾದ್ರೆ ಅವನಲ್ಲಿನ ಕೆಟ್ಟದ್ದನ್ನು ಮಾತ್ರ ಹೊರ ತೆಗೆಯಬೇಕು ಅಂದೆ.
ಸರಿ
ತಪ್ಪು ಯಾರು ಮಾಡುವುದಿಲ್ಲ ನಾವು ಸಣ್ಣವರಿರಬೇಕಾದ್ರೆ ಸಣ್ಣ ತಪ್ಪು ಮಾಡಿದ್ದೆವಲ್ಲ, ಹಾಗೇ ಈತ ದೊಡ್ಡವನಾಗಿ ದೊಡ್ಡ ತಪ್ಪು ಮಾಡಿದ್ದಾನೆ. ನೀವೆಲ್ಲಾ ದೊಡ್ದ ಮನಸ್ಸು ಮಾಡಿ ಅವನನ್ನು ಕ್ಷಮಿಸಿ ಬಿಡಿ ಅಂದಿದ್ದೆ.
ಅದಕ್ಕೇ..
ಅದಕ್ಕೇ.....???
;
;
;
;
;
;
;
;
;
;
;
;
;
ಇವನೆಲ್ಲೋ ಅವನ ಕಡೆಯವನೇ ಇರಬೇಕು, ಹಾಕ್ರೀ ನಾಲ್ಕು ಕಲ್ಲಲ್ಲಿ ಅಂದದ್ದು ಮಾತ್ರ್ ಕೇಳಿಸಿತ್ತು....
......................................................
ಎಲ್ಲಾ ಅದದ್ದು ನಿನ್ನಿಂದಲೇ ಅಂದು ಗಳಗಳ ಅತ್ತ....
................
ನೆನಪಾಯ್ತು
ಮೊನ್ನೆ ಮೊನ್ನೆ, ಅಭಿಪ್ರಾಯ ಸ್ವಾತಂತ್ಯ ಅಂದರೆ ಏನೋ ಕೇಳಿದ್ದ ಮುತ್ತ
ಅಂದರೆ ನಿನ್ನ ಆಲೋಚನೆಯನ್ನು ಎಲ್ಲಾ ಕಡೆ ಹೆದರಿಕೆಯಿಲ್ಲದೇ ಹೇಳೋದು ಅಂದಿದ್ದೆ

ಇಂತವರನ್ನೇನ್ರೀ ಮಾಡೋಣ????

No comments:

Post a Comment